Header Ads Widget

Whats-App-Image-2024-05-08-at-4-44-56-PM-4

ಬೆಳ್ಳೆ - ಕಟ್ಟಿಂಗೇರಿ ಮತದಾನ ಬಹಿಷ್ಕಾರ ಹಿಂತೆಗೆದ ಮತದಾರರು...!!


 ಮೂಡುಬೆಳ್ಳೆ  ಎ.21 : ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟಿಂಗೇರಿ ವಾರ್ಡ್ - 1 ರಲ್ಲಿರುವ , ಅಕ್ಷರ ಕರಾವಳಿ ರಸ್ತೆಯ ಅವ್ಯವಸ್ಥೆಯ ವಿರುದ್ಧ, ಸ್ಥಳೀಯ ಮತದಾರರು ಹಾಗೂ ಸಾರ್ವಜನಿಕರು ಒಟ್ಟುಸೇರಿಕೊಂಡು ಮತದಾನ ಬಹಿಷ್ಕಾರ ಮಾಡುವುದಾಗಿ ನಿರ್ಣಯ ಕೈಗೊಂಡಿದ್ದನ್ನು ತಿಳಿದ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಇಂದು ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿಯ ಮತದಾರರು ಮತ್ತು ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿದ್ದು, ಸ್ಥಳೀಯರ ಅಪೇಕ್ಷಿತ ರಸ್ತೆ ಕಾಮಗಾರಿಯ ಬಗ್ಗೆ ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಯ ಸಚಿವರ ಮಂಜೂರಾತಿ ಕಾಮಗಾರಿ ಪಟ್ಟಿಯಲ್ಲಿ ಈಗಾಗಲೇ ನಮೂದಾಗಿದ್ದು, ಮಂಜೂರಾದ ತಕ್ಷಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮನವೊಲಿಸಿದ ಮೇರೆಗೆ ಮತದಾರರು ಚುನಾವಣಾ ಬಹಿಷ್ಕಾರ ಹಿಂಪಡೆದು ಮತದಾನದಲ್ಲಿ ಭಾಗವಹಿಸಲು ಸಮ್ಮತಿ ಸೂಚಿಸಿದ್ದಾರೆ ಎಂದು ಬೆಳ್ಳೆ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರುಗಳಾದ ಶಿವಾಜಿ ಸುವರ್ಣ ಬೆಳ್ಳೆ ಹಾಗೂ ರಂಜನಿ ಹೆಗ್ಡೆಯವರು ಜಂಟಿ ಹೇಳಿಕೆಯಲ್ಲಿ ತಿಳಿಸಿರುತ್ತಾರೆ

Post a Comment

0 Comments