ಕೊಯಮತ್ತೂರು: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಮತ್ತು ಕೊಯಮತ್ತೂರು ಕ್ಷೇತ್ರದ ಅಭ್ಯರ್ಥಿ ಕೆ.ಅಣ್ಣಾಮಲೈ ಹಾಗೂ ಪಕ್ಷದ ಕೆಲವು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.
ಗುರುವಾರ ರಾತ್ರಿ 10 ಗಂಟೆಯ ಬಳಿಕವೂ ಅಣ್ಣಾಮಲೈ ಅವರು ಪ್ರಚಾರ ರ್ಯಾಲಿ ನಡೆಸಿದ್ದಾರೆ ಎಂದು ಡಿಎಂಕೆ ಮತ್ತು ಎಡಪಕ್ಷಗಳು ದೂರು ನೀಡಿದ್ದವು.
ಸಮಯದ ಮಿತಿಯನ್ನು ಉಲ್ಲಂಘಿಸಿಲ್ಲ. ಡಿಎಂಕೆಯು ಸೋಲಿನ ಭೀತಿಯಿಂದ ಸುಳ್ಳು ದೂರು ನೀಡಿದೆ ಎಂದು ಅಣ್ಣಾಮಲೈ ಪ್ರತಿಕ್ರಿಯಿಸಿದ್ದಾರೆ.
0 Comments