ಕಾರ್ಕಳ : ಮಹಿಳೆಯೋರ್ವಳ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಮಹಿಳೆಗೆ ತಂಡವೊಂದು ಹಲ್ಲೆ ಮಾಡಿದ ಘಟನೆ ಅಜೆಕಾರು ಸಮೀಪದ ಅಂಡಾರಿನಲ್ಲಿ ಸಂಭವಿಸಿದೆ.
ಮುಕ್ತಾ ಕೆ. ಎಂಬವರು ತಮ್ಮ ಮನೆಯ ಬಳಿ ಬೋರ್ವೆಲ್ ಕೊರೆಯಿಸುವ ಕೆಲಸ ಮಾಡಿಸುತ್ತಿದ್ದಾಗ ಆರೋಪಿತರಾದ ಶಂಕರ ಸೇರ್ವೆಗಾರ, ಯಶೋದ, ಅಶೋಕ, ಮಹೇಶ, ಭಾರತಿ, ಆಶಾಲತಾ, ಸಂತೋಷ, ಅಶೋಕ, ಸುರೇಶ, ಸಂತೋಷ, ಸಚಿನ್, ದಯಾನಂದ ರಾವ್ ಹಾಗೂ ಪ್ರದೀಪ ಎಂಬವರು ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಮುಕ್ತಾ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿರುತ್ತಾರೆ.
ಪರಿಣಾಮವಾಗಿ ಮುಕ್ತಾ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
0 Comments