Header Ads Widget

ಉಡುಪಿ: ಬಸ್‌ ಟೈಮಿಂಗ್‌ ವಿಚಾರಕ್ಕೆ ಗಲಾಟೆ : ಪ್ರಯಾಣೀಕರ ಎದುರೇ ಕೈ ಕೈ ಮಿಲಾಯಿಸಿದ ಕಂಡಕ್ಟರ್...!!

ಉಡುಪಿ : ಬಸ್ ಟೈಮಿಂಗ್ ವಿಚಾರವಾಗಿ ಎರಡು ಬಸ್‌ ನಿರ್ವಾಹಕರ ನಡುವೆ ಹೊಡೆದಾಟ ನಡೆದ ಘಟನೆ ಕುಂದಾಪುರ – ಮಂಗಳೂರು ನಡುವೆ ಸಂಚರಿಸುವ ಎರಡು ಬಸ್ ಗಳ ನಿರ್ವಾಹಕರ ನಡುವೆ ನಡೆದಿದೆ.

ಚಪ್ಪಲಿ ಎತ್ತಿ ಲೇಡಿ ಕಂಡಕ್ಟರ್‌ ಮತ್ತೋರ್ವ ಬಸ್‌ ನಿರ್ವಾಹಕ ನೊಂದಿಗೆ ಜಗಳವಾಡಿದ್ದಾರೆ. ಭಾರತಿ ಬಸ್ ನ ಲೇಡಿ ಕಂಡಕ್ಟರ್ ರೇಖಾ, ದುರ್ಗಾಪ್ರಸಾದ್ ಬಸ್ಸಿನ ಕಂಡಕ್ಟರ್ ರಾಘವೇಂದ್ರ ಸಂತೆಕಟ್ಟೆಯಲ್ಲಿ ಬಸ್ ನಿಲ್ಲಿಸಿದ್ದಾಗ ದುರ್ಗಾಪ್ರಸಾದ್ ಬಸ್ ನೊಳಗೆ ಬಂದು ಜಗಳವಾಡಿದ ರೇಖಾ ಪರಸ್ಪರ ಇಬ್ಬರು ಅವ್ಯಾಚ್ಯ ಶಬ್ದಗಳ ಬಳಸಿ ಪ್ರಯಾಣೀಕರ ಎದುರೇ ಕೈ ಕೈ ಮಿಲಾಯಿಸಿದ್ದಾರೆ.

ಸದ್ಯ ಕಂಡಕ್ಟರ್ ಗಳು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಉಡುಪಿಯ ಪ್ರಥಮ ಮಹಿಳಾ ಬಸ್ ಕಂಡಕ್ಟರ್ ಆಗಿ ಹೆಸರು ಮಾಡಿದ್ದ ರೇಖಾ ಕಳೆದ ಹಲವು ವರ್ಷಗಳಿಂದ ಉಡುಪಿ- ಕುಂದಾಪುರ ನಡುವೆ ಸಂಚರಿಸುವ ಭಾರತಿ ಮೋಟಾರ್ಸ್ ಬಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Post a Comment

0 Comments