Header Ads Widget

ಈಶ್ವರಪ್ಪ ಸಮಾವೇಶಕ್ಕೆ ಸಿದ್ಧಪಡಿಸಿಟ್ಟಿದ್ದ ಬಿರಿಯಾನಿ ಸೀಜ್..!!



ಬೈಂದೂರು: ಬೈಂದೂರಿನ ಉಪ್ಪುಂದದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಿನ್ನೆ ನಡೆದ ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಸಮಾವೇಶದಲ್ಲಿ ಕಾರ್ಯಕರ್ತರಿಗೆ ಹಂಚಲು ಸಿದ್ಧಪಡಿಸಿದ ಬಿರಿಯಾನಿ ಭೋಜನ ಕೂಟಕ್ಕೆ ಫ್ಲೈಯಿಂಗ್ ಸ್ಕ್ವಾಡ್ ದಾಳಿ ನಡೆಸಿ ತಡೆಯೊಡ್ಡಿರುವ ಘಟನೆ ನಡೆದಿದೆ. 

ಬಿರಿಯಾನಿ ಬಡಿಸಿದರೆ ಚುನಾವಣಾ ವೆಚ್ಚಕ್ಕೆ ಸೇರ್ಪಡೆಗೊಳಿಸುವುದಾಗಿ ತಂಡದ ಅಧಿಕಾರಿಗಳು ಕಾರ್ಯಕ್ರಮದ ಆಯೋಜಕರಿಗೆ ಎಚ್ಚರಿಕೆ ನೀಡಿದರು. ಆ ಹಿನ್ನೆಲೆಯಲ್ಲಿ ಬಿರಿಯಾನಿ ವಿತರಿಸದೆ ಅಲ್ಲೇ ಬಾಕಿಯಾಯಿತು. ಕಾರ್ಯಕರ್ತರು ಕಾದು ಸುಸ್ತಾಗಿ ಬಳಿಕ ವಾಪಾಸ್ಸು ತೆರಳಿದರು.

Post a Comment

0 Comments