ಶ್ರೀನಗರ: ಎಪ್ರಿಲ್ : 16: ಪ್ರೈಮ್ ಟಿವಿ ನ್ಯೂಸ್ : ಮಂಗಳವಾರ ಶ್ರೀನಗರದ ಝೀಲಂ ನದಿಯಲ್ಲಿ ಬೋಟ್ ಒಂದು ಮುಳುಗಡೆಯಾಗಿದ್ದು, 6 ಮಕ್ಕಳು ಮೃತಪಟ್ಟಿದ್ದು, 10 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನದಿಯನ್ನು ದಾಟಲು ಬಳಸಲಾಗುವ ಹಗ್ಗವು ದಿಢೀರೆಂದು ತುಂಡರಿಸಿದ್ದರಿಂದ ಬೋಟ್ ಮಗುಚಿಬಿತ್ತು ಎಂದು ತಿಳಿದು ಬಂದಿದೆ.
ಕಳೆದ ಕೆಲವು ದಿನಗಳಿಂದ ಈ ಪ್ರಾಂತ್ಯದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.
ಬೋಟ್ ಮಗುಚಿಕೊಂಡಾಗ ಮಕ್ಕಳು ಸೇರಿದಂತೆ 20ಕ್ಕೂ ಹೆಚ್ಚು ಮಂದಿಯನ್ನು ಹೊತ್ತೊಯ್ಯುತ್ತಿತ್ತು ಎಂದು ಹೇಳಲಾಗಿದೆ. ಈ ಪೈಕಿ 10 ಮಂದಿ ಪ್ರಯಾಣಿಕರನ್ನು ರಕ್ಷಿಸಲಾಗಿದೆ.
0 Comments