ಕಾರ್ಕಳ : ರಸ್ತೆ ಬದಿ ಬಿದ್ದು ಕೂಲಿ ಕಾರ್ಮಿಕ ಮೃತಪಟ್ಟಿರುವ ಘಟನೆ ನಿಟ್ಟೆಯಲ್ಲಿ ಸಂಭವಿಸಿದೆ.ನಿಟ್ಟೆ ಗ್ರಾಮದ ತಾನದಗುಡ್ಡೆ ಎಲಿಕಾನ್ ದರ್ಖಾಸು ಮನೆಯ ದೇವರಾಜ್ ಮೃತಪಟ್ಟವರು.
ಅನಾರೋಗ್ಯದಿಂದ ಬಳಲುತ್ತಿದ್ದ ದೇವರಾಜ್ ಮಧ್ಯಾಹ್ನ 3 ಗಂಟೆಯಿಂದ ಮನೆಯಿಂದ ಹೊರಗೆ ಹೋದವರು ವಾಪಸು ಬoದಿರಲಿಲ್ಲ. ಹುಡುಕಾಡಿದಾಗ ಮರುದಿನ ಬೆಳಗ್ಗೆ 7 ಗಂಟೆ ಹೊತ್ತಿಗೆ ನಿಟ್ಟೆ ಸಂತೋಷ್ ಫ್ಯಾಕ್ಟರಿ ಬಳಿ ಕೆಪ್ಲಾಜ್ ರಸ್ತೆ ಬದಿ ಅವರ ಮೃತದೇಹ ಸಿಕ್ಕಿದೆ. ಅವರು ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಪತ್ನಿ ಶೋಭಾ ಅವರು ನೀಡಿದ ದೂರಿನ ಪ್ರಕಾರ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ಪ್ರಕರಣ ದಾಖಲಾಗಿದೆ.
0 Comments