ಉಡುಪಿ: ಅಪರಿಚಿತ ಘನವಾಹನವೊಂದು ನಗರದ ಚಿತ್ತರಂಜನ್ ಸರ್ಕಲಿನಲ್ಲಿರುವ ಮಂಟಪಕ್ಕೆ ಗುದ್ದಿ ಪರಾರಿಯಾಗಿಯಾಗಿರುವ ಘಟನೆ ಮಂಗಳವಾರ ನಡೆದಿದೆ. ವಾಹನ ಗುದ್ದಿದ ತೀವ್ರತೆಗೆ ಚಿತ್ತರಂಜನ್ ವೃತ್ತದ ಶೋಭೆಯಾಗಿರುವ, ಮಂಟಪದ ನಾಲ್ಕು ಕಂಬಗಳಲ್ಲಿಯೂ ಬಿರುಕು ಬಿಟ್ಟಿದ್ದು, ಇವಾಗ ಮಂಟಪು ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಸ್ಥಿತಿಗೆ ತಲುಪಿದೆ.
ಮಂಟಪದ ನೆರಳಿನಲ್ಲಿ ವಲಸೆ ಕಾರ್ಮಿಕರು, ಹಮಾಲಿಗಳು, ಇಲ್ಲಿ ವಿಶ್ರಮಿಸುತ್ತಾರೆ, ಮಂಟಪದ ನಾಲ್ಕು ಕಂಬಗಳು ಶಿಥಿಲವಾಗಿರುವುದರಿಂದ ಗೋಪುರದ ಭಾರದ ನಿಯಂತ್ರಣ ಸಿಗದೆ ಮಂಟಪವು ಯಾವುದೇ ಕ್ಷಣದಲ್ಲಿಯೂ ಉರುಳಿ ಬಿದ್ದು, ಸಾವು ನೋವು ಸಂಭವಿಸುವ ಸಾಧ್ಯತೆ ಇದೆ. ತಕ್ಷಣ ನಗರಸಭೆಯವರು ಸ್ಥಳ ಪರಿಶೀಲನೆಗೊಳಿಸಿ ಸೂಕ್ತಕ್ರಮ ಜರುಗಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.
0 Comments