ಉಡುಪಿ: ನಗರದ ಸಮೀಪ ಡಿವೈಡರ್ಗೆ ಬೈಕ್ ಢಿಕ್ಕಿ ಹೊಡೆದು ಓರ್ವ ಮೃತಪಟ್ಟು ಮೂವರು ಗಾಯಗೊಂಡ ಘಟನೆ ನಡೆದಿದೆ.
ಕರಾವಳಿ ಬೈಪಾಸ್ ಕಡೆಯಿಂದ ಶಿರಿಬೀಡು ಕಡೆಗೆ ಬೈಕ್ ಸವಾರ ರಾಯಚೂರಿನ ಸಿಂಧನೂರು ಮೂಲದ ಶರಣಬಸವ ಎಂಬಾತ ತನ್ನ ಬೈಕ್ನಲ್ಲಿ ಸಹಸವಾರರಾದ ಮಂಜುನಾಥ್, ರಮೇಶ್ ಮತ್ತು ಯಮನೂರು ಅವರನ್ನು ಕುಳ್ಳಿರಿಸಿಕೊಂಡು ಅತೀ ವೇಗದಲ್ಲಿ ಚಲಾಯಿಸಿಕೊಂಡು ಬಂದು ಡಿವೈಡರ್ಗೆ ಢಿಕ್ಕಿ ಹೊಡೆದಿದ್ದಾನೆ.
ಪರಿಣಾಮವಾಗಿ ಬೈಕ್ನಲ್ಲಿದ್ದ ನಾಲ್ವರೂ ರಸ್ತೆಗೆ ಬಿದ್ದಿದ್ದಾರೆ. ಬೈಕ್ ಸವಾರ ಶರಣಬಸವ ಡಿವೈಡರ್ ಮಧ್ಯೆ ಇರುವ ಕಬ್ಬಿಣದ ರಾಡ್ ಮೇಲೆ ಬಿದ್ದು, ಎಡ ಕಂಕುಳದ ಬಳಿ ಗಂಭೀರ ಸ್ವರೂಪದ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.
ಇನ್ನುಳಿದ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
0 Comments