Header Ads Widget

ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನಾ ಸಮಿತಿ ನೇಮಕ..!!


ಬೆಳ್ಮಣ್: ಕಾರ್ಕಳ ತಾಲೂಕಿನ ಇತಿಹಾಸ ಪ್ರಸಿದ್ಧ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ 9 ಮಂದಿ ಸದಸ್ಯರ ನೂತನ ವ್ಯವಸ್ಥಾಪನ ಸಮಿತಿಯನ್ನು ರಚಿಸಿ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಆದೇಶ ಹೊರಡಿಸಿದೆ.

ದೇವಳದ ಪ್ರಧಾನ ಅರ್ಚಕ ರಾಮದಾಸ್ ಭಟ್, ಸುರೇಂದ್ರ ಎಸ್ ಶೆಟ್ಟಿ ಕೋರಿಬೆಟ್ಟು, ಸುಜಾತ ಸುಬೋಧ್ ಶೆಟ್ಟಿ ಸಚ್ಚರಪರಾರಿ, ಅಕ್ಷತಾ ವಿಶ್ವಿತ್ ಶೆಟ್ಟಿ ಸಂಕಲಕರಿಯ, ಜಗದೀಶ ಎಸ್ ಶೆಟ್ಟಿ ಸಚ್ಚೇರಿಪೇಟೆ, ಶೇಖರ ಎಸ್ ಶೆಟ್ಟಿ ಮಾಣಿಬೆಟ್ಟು, ಕೃಷ್ಣ ಪೂಜಾರಿ ಬಂಡ್ರೊಟ್ಟು ಮುಂಡ್ಕೂರು, ಸುರೇಶ್ ಸಾಲಿಯಾನ್ ಅಲಂಗಾರ್, ನಳಿನಾಕ್ಷಿ ರಾಜು ಸೇರಿಗಾರ ಕಡಪುಕರಿಯ ಇವರುಗಳನ್ನು ಸದಸ್ಯರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯನ್ನು ವ್ಯವಸ್ಥಾಪನ ಸಮಿತಿಯ ಪದನಿಮಿತ್ತ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದ್ದು, ಸದಸ್ಯರ ಪ್ರಥಮ ಸಭೆಯಲ್ಲಿ ಓರ್ವ ಸದಸ್ಯನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ನಡಾವಳಿಯನ್ನು ಸಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಆದೇಶದಲ್ಲಿ ತಿಳಿಸಿದೆ.

Post a Comment

0 Comments