ಕಾರ್ಕಳ : ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದವರನ್ನು ಪೊಲೀಸರು ಚೆಕ್ಪೋಸ್ಟ್ನಲ್ಲಿ ವಶಕ್ಕೆ ಪಡೆದ ಘಟನೆ ನಿನ್ನೆ ಬೋಳ ಗ್ರಾಮದಲ್ಲಿ ಸಂಭವಿಸಿದೆ.
ಕಾರ್ಕಳ ನಗರ ಪೊಲೀಸ್ ಠಾಣೆ ಸಿಪಿಸಿ ಗಜ ನಾಯ್ಕ ಇವರು ಎಪಿಸಿ ಪ್ರವೀಣ್ ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿಯವರೊಂದಿಗೆ ಬೋಳ ಗ್ರಾಮದ ಬರಬೈಲು ಎಂಬಲ್ಲಿ ಚೆಕ್ ಪೋಸ್ಟ್ನಲ್ಲಿ ಕರ್ತವ್ಯದಲ್ಲಿರುವಾಗ ನಿನ್ನೆ ಡೆನಿಲ್, ಆನಂದ, ಪರಸಪ್ಪ, ನಿತಿನ್ ಬೆಳ್ವೆ, ನಿತಿನ್ ಭೈರಂಜೆ ಹಾಗೂ ಆತ್ರಾಡಿ ದಿಲೀಪ್ ಎಂಬವರು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೆ, ಎಲ್ಲಿಂದಲೋ ಕಳ್ಳತನ ಮಾಡಿ ಸಚ್ಚರಿಪೇಟೆ ಕಡೆಯಿಂದ ಕೆದಿಂಜೆ ಕಡೆಗೆ ಮೂರು ಟಿಪ್ಪರ್ ವಾಹನಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದು ತಿಳಿದು ಬಂದಿರುತ್ತದೆ.
0 Comments