ಹೊಸದಿಲ್ಲಿ: ಮಾರ್ಚ್ : 20: ಪ್ರೈಮ್ ಟಿವಿ ನ್ಯೂಸ್ : ಸದ್ಯ ರದ್ದಾಗಿರುವ ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ತೆಲಂ ಗಾಣದ ಮಾಜಿ ಸಿಎಂ ಕೆ.ಚಂದ್ರಶೇಖರ ರಾವ್ ಪುತ್ರಿ ಕೆ.ಕವಿತಾ ಅವರೇ ಸಂಚು ರೂಪಿಸಿದ್ದಾರೆ. ಜತೆಗೆ ಆಪ್ಮುಖ್ಯಸ್ಥ ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋಡಿಯಾಗೆ 100 ಕೋಟಿ ರೂ. ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಸೋಮವಾರ ಹೇಳಿದೆ.
ಕವಿತಾ ಬಂಧನದ ಬಳಿಕ ಮೊದಲ ಬಾರಿ ಹೇಳಿಕೆ ನೀಡಿರುವ ಇ.ಡಿ., ಸಿಎಂ ಕೇಜ್ರಿವಾಲ್ ಹಾಗೂ ಮನೀಶ್ ಅವರನ್ನು ಕವಿತಾ ಸಂಚಿನಲ್ಲಿ ಭಾಗಿ ಮಾಡಿದ್ದರು. ಈ ಮೂಲಕ ತಮಗೆ ಬೇಕಾ ದವರಿಗೆ ಮದ್ಯ ಮಾರಾಟದ ಪರವಾನಿಗೆ ಕೊಡಿಸಿದ್ದಲ್ಲದೆ ಇದಕ್ಕೆ ಪ್ರತಿಯಾಗಿ ದಿಲ್ಲಿ ಸರಕಾರಕ್ಕೆ ನೀಡಲಾದ 100 ಕೋಟಿ ರೂ. ಲಂಚದಲ್ಲಿ ನೇರ ವಾಗಿ ಪಾತ್ರ ವಹಿಸಿದ್ದರು ಎಂದಿದೆ. ಈ ಮೊದಲು ಮಾತನಾಡಿದ್ದ ಕವಿತಾ, ನಾನು ತಪ್ಪು ಮಾಡಿಲ್ಲ ಎಂದಿದ್ದರು.
ದಿಲ್ಲಿ ಅಬಕಾರಿ ನೀತಿ ಪ್ರಕರಣ ದಲ್ಲಿ ತಮ್ಮ ಬಂಧನವನ್ನು ಪ್ರಶ್ನಿಸಿ ಕವಿತಾ ಸುಪ್ರೀಂ ಮೆಟ್ಟಿ ರೇಲಿದ್ದಾರೆ. ಸೋದರ ಕೆ.ಟಿ. ರಾಮ ರಾವ್ರನ್ನು ಭೇಟಿ ಮಾಡಿದ ಬಳಿಕ ಈ ಬೆಳವಣಿಗೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕವಿತಾರನ್ನು ಶುಕ್ರವಾರ ಬಂಧಿಸಲಾಗಿತ್ತು.
0 Comments