ಹೊಸದಿಲ್ಲಿ: ಮಾರ್ಚ್ : 16: ಪ್ರೈಮ್ ಟಿವಿ ನ್ಯೂಸ್ : ದೇಶದಲ್ಲೇ ಸಂಚಲನ ಮೂಡಿಸಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಅಮಿನ್ ಪೂನಾವಾಲನನ್ನು ದಿನಕ್ಕೆ 8 ಗಂಟೆಗಳ ಕಾಲ ಇತರ ಕೈದಿಗಳ ಜತೆ ಬಿಡಬೇಕೆಂದು ದಿಲ್ಲಿ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.
ಅಪಾಯಕಾರಿಯೆಂಬ ಕಾರಣಕ್ಕೆ ಅಫ್ತಾಬ್ ಬಂಧನವಾದಾಗಿನಿಂದಲೂ ಆತನನ್ನು ಏಕಾಂಗಿಯಾಗಿ ಜೈಲಿನಲ್ಲಿ ಇಡಲಾಗಿತ್ತು. ಇದನ್ನು ಪ್ರಶ್ನಿಸಿ ಆತನ ವಕೀಲ ಹೈಕೋರ್ಟ್ ಮೊರೆ ಹೋಗಿದ್ದು, ಕನಿಷ್ಠಪಕ್ಷ ದಿನಕ್ಕೆ 2 ಗಂಟೆಯಾದರೂ ಏಕಾಂಗಿ ಕೋಣೆಯಿಂದ ಹೊರ ಬಿಡುವಂತೆ ಆದೇಶಿಸಬೇಕು ಎಂದು ಮನವಿ ಮಾಡಿದ್ದರು.
ಈ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಈ ಆದೇಶ ನೀಡಿದೆ.
0 Comments