Header Ads Widget

ಕಾಪು: 50 ಲಕ್ಷ ರೂಪಾಯಿ ಅನುದಾನದಲ್ಲಿ ಕುರ್ಕಾಲು ನದಿದಂಡೆ ಸಂರಕ್ಷಣಾ ಕಾಮಗಾರಿ : ಇಲಾಖಾಧಿ ಕಾರಿಗಳೊಂದಿಗೆ ಶಾಸಕರು ಪರಿಶೀಲನೆ..!!


ಕಾಪು : ಮಾರ್ಚ್ 13: ಪ್ರೈಮ್ ಟಿವಿ ನ್ಯೂಸ್ : ಕುರ್ಕಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಯ್ಕರ ತೋಟ ಬಳಿ ನದಿದಂಡೆ ಸಂರಕ್ಷಣೆಗೆ 50 ಲಕ್ಷ ರೂಪಾಯಿ ಅನುದಾನ ಮಂಜೂರಾಗಿ ಕಾಮಗಾರಿ ಪ್ರಗತಿಯಲ್ಲಿದ್ದು,  ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಇಲಾಖಾಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಈ ಸಂದರ್ಭದಲ್ಲಿ ಕುರ್ಕಾಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ, ಸದಸ್ಯರಾದ ಸಿಮಿ ಡಿಸೋಜಾ, ಪ್ರವೀಣ್ ಕುರ್ಕಾಲು, ಸುದರ್ಶನ್ ರಾವ್ ಸ್ಥಳೀಯರಾದ ಸ್ಟೇನಿ ಪಿರೇರಾ, ವಿಜಯ ಕಾಂಚನ್ ಹಾಗೂ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಅರುಣ್ ಭಂಡಾರಿ, ಸಹಾಯಕ ಅಭಿಯಂತರರಾದ ಮಮತಾ ಉಪಸ್ಥಿತರಿದ್ದರು.

Post a Comment

0 Comments