Header Ads Widget

Whats-App-Image-2024-05-08-at-4-44-56-PM-4

ಕಟ್ಟಡದಲ್ಲಿ ಅಗ್ನಿ ಅವಘಡ : ಮಕ್ಕಳು ಸೇರಿ 4 ಮಂದಿ ಸಜೀವ ದಹನ...!!

ದೆಹಲಿ: ಮಾರ್ಚ್ : 15: ನಗರದ ಗೀತಾ ಕಾಲೋನಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಮಕ್ಕಳು ಸೇರಿದಂತೆ ನಾಲ್ಕು ಮಂದಿ ಸಜೀವ ದಹನವಾಗಿದ್ದಾರೆ.

ಬೆಂಕಿ ಕಾಣಿಸಿಕೊಂಡ ತಕ್ಷಣವೇ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿಸಿದ್ದಾರೆ. ಘಟನೆ ಬೆಳಗ್ಗೆ 5.22 ಸುಮಾರಿಗೆ ನಡೆದಿದೆ ಎನ್ನಲಾಗಿದೆ.

ಅಗ್ನಿಶಾಮಕ ಸಿಬ್ಬಂದಿ ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿದ್ದು ಬಹಳ ಹೊತ್ತು ನಂತರ ಬೆಂಕಿ ಸಂಪೂರ್ಣವಾಗಿ ನಂದಿಸಿದ್ದಾರೆ. ಅಲ್ಲಿಯ ಪಾರ್ಕಿಂಗ್‌ ಪ್ರದೇಶದಿಂದ ಬೆಂಕಿ ಹಬ್ಬುತ್ತ ಕಟ್ಟಡವನ್ನು ಆವರಿಸಿದೆ ಎನ್ನಲಾಗಿದೆ.

ಈ ಅವಘಡದಲ್ಲಿ ಸಜೀವ ದಹನವಾದವರು ಒಂದೇ ಕುಟುಂಬದ ಪತಿ ಮನೋಜ್‌(30),ಪತ್ನಿ ಸುಮನ್‌(28) ಹಾಗೂ ಇಬ್ಬರು ಸಹೋದರಿಯರು ಎಂದು ತಿಳಿದುಬಂದಿದೆ.

Post a Comment

0 Comments