ಮಂಗಳೂರು: ನಗರದ ಸಮೀಪದ ಬೈಕ್ಗಳ ನಡುವೆ ಅಪಘಾತ ಸಂಭವಿಸಿ ಓರ್ವ ಮೃತಪಟ್ಟಿರುವ ಘಟನೆ ಸುರತ್ಕಲ್ – ಎಂಆರ್ ಪಿಎಲ್ ರಸ್ತೆಯ ಕಾನ ಕಟ್ಲ ಸೀತಾ ಕಾಂಪೌಂಡ್ ಬಳಿಯ ಮಿಲ್ಕ್ ಪಾರ್ಲರ್ ಬಳಿ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟವರು ಕಾನ ಗಣೇಶ್ ಬೀಡಿ ಬಳಿಯ ನಿವಾಸಿ ಯಶೋಧರ (23) ಎಂದು ತಿಳಿಯಲಾಗಿದೆ.
ಅವರೊಂದಿಗೆ ಹಿಂಬದಿ ಸವಾರರಾಗಿ ಸಂಚರಿಸುತ್ತಿದ್ದ ಕಾನ ಕಟ್ಟೆ ಬಳಿಯ ನಿವಾಸಿ ಕಿಶೋರ್ (18) ಹಾಗೂ ಇನ್ನೊಂದು ವಾಹನದಲ್ಲಿ ಸಂಚರಿಸುತ್ತಿದ್ದ ಮೂಲತಃ ಕೇರಳ ನಿವಾಸಿಗಳು ಹಾಗೂ ಮುಕ್ಕ ಕಾಲೇಜೊಂದರ ವಿದ್ಯಾರ್ಥಿಗಳಾದ ಅಮನ್(21), ಮುಹಮ್ಮದ್ ಆದಿಲ್ ( 21), ಮುಹಮ್ಮದ್ ತಫಾದ್ (21) ಎಂಬವರಿಗೆ ಗಾಯಗಳಾಗಿದ್ದು, ಎಲ್ಲರನ್ನೂ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲೈಟಿಂಗ್ ಕೆಲಸ ಮುಗಿಸಿ ಬರುತ್ತಿದ್ದ ಯಶೋಧರ, ಕಿಶೋರ್ ಗೆ ಒಂದೇ ಬೈಕಿನಲ್ಲಿ ಮೂವರು ಸಂಚರಿಸುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
0 Comments