Header Ads Widget

ಬೋಳ ಶಾಲೆ - ಮಕ್ಕಳ ಹಬ್ಬ..!!


ಬೆಳ್ಮಣ್: ದೇವರು ಕೊಟ್ಟಿರುವ ಸಾಮರ್ಥ್ಯ, ಸಂಪತ್ತನ್ನು ಅನುಭವಿಸಿ, ಜೀವನದಲ್ಲಿ ಸಾರ್ಥಕರಾಗಿ ಎಂದು ಮುಲ್ಲಡ್ಕ ಡಾನ್-ಬೋಸ್ಕೋ ಸ್ಕೂಲ್‌ನ ಪ್ರಾಂಶುಪಾಲರಾದ ಫಾ. ಮಿಲ್ಟನ್ ಫೆರ್ನಾಂಡಿಸ್ ಹೇಳಿದರು. ಬೋಳಕೋಡಿ ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಎನ್.ಎಂ.ಎ.ಎಂ. ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ನಿಟ್ಟೆ ಇಲ್ಲಿನ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ ಇಂಜಿನಿಯರಿಂಗ್ ಡಾ. ಸೂರ್ಯನಾರಾಯಣ ಕೆ. ಅಧ್ಯಕ್ಷತೆ ವಹಿಸಿದ್ದರು.

ಎನ್.ಎಂ.ಎ.ಎಂ.ಐಟಿ ನಿಟ್ಟೆ ಇಲ್ಲಿನ ಹೆಚ್.ಒ.ಡಿ. ಹ್ಯೂಮಾನಿಟೀಸ್ ಚೀಫ್ ವಾರ್ಡನ್ ಡಾ. ವಿಶ್ವನಾಥ್, ಬೋಳ ಗ್ರಾ.ಪಂ. ಅಧ್ಯಕ್ಷ ದಿನೇಶ್ ಪೂಜಾರಿ, ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ, ನಿವೃತ್ತ ಉಪನ್ಯಾಸಕ ಬಿ. ಸೀತಾರಾಮ ಭಟ್, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕಾರ್ಕಳ ಇದರ ಅಧ್ಯಕ್ಷ ಪೃಥ್ವಿರಾಜ್ ಬಲ್ಲಾಳ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಭಾಸ್ ಶೆಟ್ಟಿ ಮಾರಗುತ್ತು ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಲಕ್ಕೊಂಡ ಎ. ಸ್ವಾಗತಿಸಿ, ಶಿಕ್ಷಕಿ ಸುಚೇತ ಶೆಟ್ಟಿ ವಂದಿಸಿದರು. ಶಿಕ್ಷಕ ಸುಧೀರ್ ನಾಯಕ್ ಮತ್ತು ಶರತ್ ಶೆಟ್ಟಿ ಸಚ್ಚೇರಿಪೇಟೆ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments