ಉಡುಪಿ, ಡಿ.1; ಪ್ರೈಮ್ ಟಿವಿ ನ್ಯೂಸ್ : ವೃದ್ಧೆಯೊರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಡಿಕೊಂಡಿರುವ ಕಲ್ಯಾಣಪುರ ಸುಬ್ರಹ್ಮಣ್ಯ ನಗರದಲ್ಲಿ ನಿನ್ನೆ ನಡೆದಿದೆ.
ಆತ್ಮಹತ್ಯೆಗೈದಿರುವ ವೃದ್ಧೆಯನ್ನು ಬಡ್ಡು ಪೂಜಾರ್ತಿ (88ವ) ಎಂದು ಗುರುತಿಸಲಾಗಿದೆ. ಅಗ್ನಿಶಾಮಕ ದಳದ ಸಹಕಾರದಿಂದ ಶವವನ್ನು ಮೇಲಕ್ಕೆತ್ತಾಲಾಯಿತು.
ಉಡುಪಿ ನಗರ ಠಾಣೆಯ ಎ. ಎಸ್. ಐ ಹರೀಶ್ ನಾಯ್ಕ್ ಮಾಳ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಲು ಸಮಾಜ ಸೇವಕ ನಿತ್ಯಾನಂದ ಒಳಕಾಡು ನೆರವಾದರು. ಚೇತನ್, ಕಿರಣ್, ಶಿವ ಕುಮಾರ್, ರಂಗರಾಜ ಸಹಕರಿಸಿದರು
0 Comments