ಮುಖ್ಯ ಅತಿಥಿಗಳಾಗಿ ಆಲ್ಬರ್ಟ್ ರೊಡ್ರಿಗರ್ಸ್ ನಿವೃತ್ತ ಪ್ರಾಂಶುಪಾಲರು, ಶಿರ್ವಾ, ಧ್ವಜಾರೋಹಣ ಗೈದು ಉದ್ಘಾಟಿಸಿದರು. ಕಾಲೇಜಿನ ನಾಲ್ಕು ತಂಡದವರಿಂದ ಪಥಸಂಚಲನ ಜರುಗಿತು. ಅಧ್ಯಕ್ಷರನ್ನು ಒಳಗೊಂಡು ಕ್ರೀಡಾಜ್ಯೋತಿಯನ್ನು ಕ್ರೀಡಾಪಟುಗಳಿಗೆ ಹಸ್ತಾಂತರಿಸಿದರು. ಕ್ರೀಡಾಪಟುಗಳು ಕ್ರೀಡಾಜ್ಯೋತಿಯನ್ನು ಬೆಳಗಿಸಿದರು. ಪಾರಿವಾಳವನ್ನು ಹಾರಿಸಿ ಕ್ರೀಡೆಗೆ ಚಾಲನೆಯನ್ನು ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಆಲ್ಬರ್ಟ್ ರೊಡ್ರಿಗರ್ಸ್ ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆ ಎಷ್ಟು ಮುಖ್ಯ ಎಂಬುವುದನ್ನು ತಿಳಿಸಿ ಹೇಳಿದರು. ಮನುಷ್ಯನು ಆರೋಗ್ಯದಿಂದ ಇರಲು ಕ್ರೀಡೆ ಹಾಗೂ ಹಿತಮಿತವಾದ ಆಹಾರ ಮುಖ್ಯ ಎನ್ನುತ್ತಾ ವಿದ್ಯಾರ್ಥಿಗಳ ಶಿಸ್ತನ್ನು ಶ್ಲಾಘಿಸಿದರು.
ಸ್ಥಾಪಕ ಅದ್ಯಕ್ಷರು , ವಕೀಲರಾದ ಗೋಪಿಕೃಷ್ಣ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಯು . ಎಲ್ ಭಟ್ ಸ್ವಾಗತಿಸಿ, ದೈಹಿಕ ಶಿಕ್ಷಕ ಜಯರಾಜ್ ವಂದಿಸಿದರು ಗಣಿತ ಶಾಸ್ತ್ರ ಉಪನ್ಯಾಸಕಿ ರೇಷ್ಮಾ ಭರತ್ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಕಾರ್ಯಕ್ರಮ!!!
ಕಾಲೇಜಿನ ಜ್ಞಾನಮಂಟಪದಲ್ಲಿ ಸಮಾರೋಪ ಕಾರ್ಯಕ್ರಮ ಜರುಗಿತು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ರೂಪಾ ಕಾಮತ್,ಮೋಹಿನಿ ಪೈ, ಪ್ರತಿಭಾ ಕಾಮತ್ ಉಪಸ್ಥಿತರಿದ್ದರು. ರೂಪಾ ಕಾಮತ್ ರವರು ವಿಜೇತರಾದ ಕ್ರೀಡಾಪಟುಗಳನ್ನು ಅಭಿನಂದಿಸುತ್ತಾ, ಕ್ರೀಡಾಕೂಟ ದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದು ಮುಖ್ಯ, ಸೋಲು ಗೆಲುವು ಮುಖ್ಯವಲ್ಲ ಎಂದರು.
ಕಾಲೇಜಿನ ಪ್ರಾಂಶುಪಾಲರು ಯು.ಎಲ್.ಭಟ್ ಸ್ವಾಗತಿಸಿ ,ದೈಹಿಕ ನಿರ್ದೇಶಕರಾದ ಜಯರಾಜ್ ವಂದಿಸಿದರು. ಕಾರ್ಯಕ್ರಮವನ್ನು ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ದಿವ್ಯಾ ನಿರೂಪಿಸಿದರು.
0 Comments