ಕುಂದಾಪುರ: ಸೈಕಲ್ ಸವಾರರೊಬ್ಬರು ಬಸ್ಸಿನ ಎದುರಿನ ಟೈಯರ್ ಅಡಿಗೆ ಸಿಲುಕಿ ಕೂದಲೆಳೆಯಲ್ಲಿ ಪಾರಾದ ಘಟನೆ ಕುಂದಾಪುರದ ಶಾಸ್ತ್ರಿ ಸರ್ಕಲ್ ಪರಿಸರದಲ್ಲಿ ನಿನ್ನೆ ನಡೆದಿದೆ.
ಎಡಮಗ್ಗಲಿಗೆ ತಿರುಗಿದ ಬಸ್, ರಸ್ತೆಯ ಅಂಚಿನಲ್ಲಿ ಸೈಕಲ್ ಚಲಾಯಿಸುತ್ತಿದ್ದ ವ್ಯಕ್ತಿಗೆ ಡಿಕ್ಕಿಯಾಗಿದೆ. ತಕ್ಷಣವೇ ಬ್ರೇಕ್ ಹಾಕಿದ ಪರಿಣಾಮ ಜೀವಹಾನಿ ಸಂಭವಿಸಿಲ್ಲ.
ಬೈಕ್ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಹೆಲ್ಮೆಟ್ಗೆ ಅಳವಡಿಸಿದ ಕೆಮರಾದಲ್ಲಿ, ಈ ಭೀಕರ ವಿಡಿಯೋ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
0 Comments