Header Ads Widget

ಜ. 6 ರಂದು ಕಾರ್ಕಳಕ್ಕೆ ಹಝ್ರತ್ ಮೌಲಾನ ಮುಫ್ತೀ ಸಾಜಿದ್ ಅಲಿ ಮಿಸ್ಬಾಹಿ ಮುಂಬೈ..!!


ಕಾರ್ಕಳ : ಕಾರ್ಕಳ ಜಲ್ವಾ ಎ ನೂರ್ ಪುಲ್ಕೇರಿ ಇದರ ಹುಬ್ಬುರಸ್ಸೂಲ್ ಕಾನ್ಫರೆನ್ಸ್ ಜನವರಿ 6 ರಂದು ಕುರ್ಲಾ ಮುಂಬೈಯ ಖ್ಯಾತ ವಿದ್ವಾಂಸ ನಾಸೀರೆ  ಮಸ್ಲಕೆ ಅಲಾಹಝ್ರತ್, ಖಲೀಪಾಯೇ ಹುಝೂರ್ ತಾಜುಶ್ಶರಿಯಾ ಹಝ್ರತ್ ಮೌಲಾನ ಮುಫ್ತಿ ಸಾಜೀದ್ ಅಲಿ ಮಿಸ್ಬಾಹಿ ರಝ್ವೀ  ನೇತ್ರತ್ವದಲ್ಲಿ ಅಸರ್ನ ಮಾಜ್ ನಂತರ ಕಾರ್ಕಳ ಪುಲ್ಕೇರಿ ಬೈಪಾಸ್ ಬಳಿ ನಡೆಯಲಿದೆ.

ಖಲಿಫಾಯೇ ಹುಝುರ್ ತಾಜುಶ್ಶರೀಯಾ, ವ ಗುಲ್ಝಾರೆ ಮಿಲ್ಲತ್ ಹಝ್ರತ್ ಅಲ್ಲಾಮ  ಡಾ. ಮುಹಮ್ಮದ್ ಫಾಝಿಲ್ ರಿಝ್ವಿ ಕಾವಲ್ಕಟ್ಟೆ, ಮಿತ್ತೂರು ಕೆ ಜಿ ಎನ್ ದಾವ ಕಾಲೇಜು ಪ್ರೊಫೆಸರ್ ಮುಹಮ್ಮದ್ ಹುಸೈನ್ ಅಹಸನಿ ಅಲ್ ಮುಯಿನಿ ಅವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ.

ಪ್ರಗಲ್ಬ ದೀನಿ ವಿದ್ವಾಂಸರುಗಳಾದ ಖಲಿಫಾಯೇ ಹುಝುರ್ ತಾಜುಶ್ಶರೀಯಾ, ಮುಫ್ತಿ ಬದ್ರುದ್ಧೀನ್ ಅಹ್ಮದ್ ಮಿಸ್ಬಾಹಿ ರಿಝ್ವಿ ಕರಿಯನಂಗಡಿ, ಬಂಗ್ಲೆಗುಡ್ಡೆ ತ್ವೈಬಾ ಗಾರ್ಡನ್ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಮೌಲಾನ ಅಹ್ಮದ್ ಶರೀಫ್ ಸಅದಿ,    ಕಾರ್ಕಳ ಜಲ್ವಾ ಎ ನೂರ್ ಕಾರ್ಕಳದ ಸಹೀದ್   ರಝಾ ನೂರಿ , ಬೆಳುವಾಯಿ ಸುನ್ನಿ ಜಾಮೀಯ ಮಸೀದಿ ಖತೀಬ್ ಮುಫ್ತಿ ಗುಲಾಮ್  ಬರ್ಖಾತಿ ರಝ್ವಿ, ಹೊಸ್ಮಾರ್ ರಝಾ ಜಾಮೀಯ ಮಸೀದಿ ಖತೀಬ್ ರಫಿಯುಝಮ ರಝ್ವಿ ಯವರು ಭಾಗವಹಿಸಲಿದ್ದಾರೆ. 

ಉತ್ತರ ಪ್ರದೇಶ ರಾಯ್ ಬರೇಲಿಯಾ ಮೌಲಾನ ಶಾ ಆಲಂ ಅವರ ನಾಥೆ ಎ ಶರೀಫ್ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮೌಲಾನ ಅಬ್ದುಲ್ ಮಜೀದ್ ಸಾಹೇಬ್ ರಝ್ವಿ ಬೆಳುವಾಯಿ, ಮದೀನ ಮಸೀದಿ ಮಂಗಳೂರು  ಖತೀಬರಾದ ಮೌಲಾನ ಮಕ್ಬೂಲ್ ಸಹಾಬ್ ರಝ್ವಿ, ಮಿಯ್ಯಾರು ಜಾಮೀಯ ಮಸೀದಿ ಖತೀಬ್ ಮೌಲಾನ ಅಬ್ದುರಾಶೀಕ್ ಸಹಾಬ್ ರಝ್ವಿ, ಹಂಚಿಕಟ್ಟೆ ಆಯೇಷಾ ಮಸೀದಿ ಖತೀಬ್ ಮೌಲಾನ ಜನ್ನುರೈನ್ ಸಹಾಬ್ ರಝ್ವಿ, ನಲ್ಲಿಕಾರ್ ಮಸೀದಿ ಖತೀಬ್ ಸಲಾಹುದ್ದೀನ್ ಸಹಾಬ್ರ ಝ್ವಿ , ತೆಳ್ಳಾರ್ ಸುನ್ನಿ ಜಾಮೀಯ ಮಸೀದಿ ಖತೀಬ್ ಆದೀಲ್ ರಝಾ ಸಹಾಬ್ ರಝ್ವಿ , ಮಾರ್ನಾಡ್ ಸುನ್ನಿ ಜಾಮೀಯ ಮಸೀದಿ ಖತೀಬ್ ಮೌಲಾನ ಅಯ್ಯೂಬ್ ಸಹಾಬ್ ರಿಝ್ವಿ, ಕರಿಯನಂಗಡಿ ಬೆಳ್ವಾಯಿ ಸುನ್ನಿ ಜಾಮೀಯ ಮಸೀದಿ ಖತೀಬ್ ಮೌಲಾನ ಅಬ್ದುಲ್ ರಹಮಾನ್ ಸಾಹೇಬ್  ರಿಝ್ವಿ, ಬಂಗ್ಲೆಗುಡ್ಡೆ ತ್ವೈಬಾ ಗಾರ್ಡನ್ ನ ಮೌಲಾನ ಅಶ್ಪಾಕ್ ಅಹ್ಮದ್ ಸಖಾಫಿ, ಹಾಗೂ ವಿವಿಧ ಜಿಲ್ಲೆಗಳ ಇನ್ನಿತರ ಉಲೇಮಾ ಉಮರಾಗಳು ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕಾರ್ಕಳ ತಾಲೂಕು ಅಧ್ಯಕ್ಷ, ಮೊಹಮ್ಮದ್ ಗೌಸ್ ಮಿಯ್ಯಾರು, ಕಾರ್ಕಳ ಜಲ್ವಾ ಎ ನೂರ್ ಪುಲ್ಕೇರಿ ಅಧ್ಯಕ್ಷ, ಕರ್ನಾಟಕ ಮುಸ್ಲಿಮ್ ಜಮಾತ್  ಕಾರ್ಕಳ ಅಧ್ಯಕ್ಷ ನಾಸೀರ್ ಶೇಖ್ ಬೈಲೂರು ತಿಳಿಸಿದ್ದಾರೆ.

Post a Comment

0 Comments