Header Ads Widget

Whats-App-Image-2024-05-08-at-4-44-56-PM-4

ಎಲ್ಲಾ ಹುಡುಗರು ಹಬ್ಬದ ಸಡಗರದಲ್ಲಿ ತೇಲುತ್ತಿರುವಾಗ ಇಲ್ಲೊಬ್ಬ ಒಬ್ಬರ ಜೀವ ಉಳಿಸಲೋಸುಗ ವೇಷ ಕಟ್ಟಿ ನಿಂತಿದ್ದ..!!


ಬೈಂದೂರು: ಬೈಂದೂರು ತಾಲೂಕಿನ ಆಪದ್ಬOದವ ಹಾಗೂ ಸಮಾಜಸೇವಕರಾದ... ಬೆಂಕಿ ಮಣಿ ಸಂತು... ಅರೆಹೊಳೆ...ಈ ಹಿಂದೆ ಅದೆಷ್ಟೋ ಬಡವರ ಶಸ್ತ್ರಚಿಕಿತ್ಸೆಗೆ  ಸಹಾಯ ಮಾಡಿದ ಕೀರ್ತಿ ಇವರದ್ದು ಇಂದು ರಾಘವೇಂದ್ರ ಎರಡು ಕಿಡ್ನಿ ವೈಫಲ್ಯದಿOದ ಬಳಲುತ್ತಿರುವ ಡಯಾಲಿಸಿಸ್ಗೆ ಸುಮಾರು 20ಸಾವಿರಾ ಹಾಗೂ ತನ್ನ ತಾಯಿಯ ಒಂದು ಕಿಡ್ನಿಯನ್ನು ಕಸಿ ಮಾಡಲು ಸುಮಾರು 13ಲಕ್ಷ ರೂಪಾಯಿ ತಗುಲುವುದು ಎಂದು ವೈದ್ಯರು ತಿಳಿಸಿದ್ದಾರೇ ಇದನ್ನು ಗಮನಿಸಿದ ಸ್ಥಳೀಯ ಸಂಘ ಸಂಸ್ಥೆಯಾದ ವಿವೇಕಾನಂದ ಯುವಕ ಮಂಡಳಿ ಬವಳಾಡಿ ಮತ್ತು ಬೆಂಕಿಮಣಿ ಸಂತು  ಇಂದು ಶ್ರೀ ದುರ್ಗಾಪರಮೇಶ್ವರಿ ದೇವಾಸ್ಥಾನ ಉಪ್ಪುಂದದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ  ಸಹಾಯಾರ್ಥವಾಗಿ ಬೆಳ್ಳಿಗೆ  3ಗಂಟೆ ರಾತ್ರಿಗೇ ಉಡುಪಿಯ ಕಟಪಾಡಿ ಹೋಗಿ ತನ್ನ ಇಡೀ ದೇಹದ ಮೇಲೆ ಟ್ರೀ ಮ್ಯಾನ್  ರೂಪವನ್ನು  ಹೊOದುವ ಚಿತ್ರ ವಿಚಿತ್ರ ವೇಷವನ್ನು ತೊಟ್ಟು ಜೊತೆಗೆ ತನ್ನ ಎರಡು ಮುದ್ದಾದ ಮಕ್ಕಳಾದ 7ವರ್ಷದ ಚಿರಾಯು ಹಾಗೂ 3 ವರ್ಷದ ಪುಟ್ಟ ಮಗು ಚಿರಂತ್ ಕೂಡ ಅಪ್ಪ ನಾವು ಕೂಡ ವೇಷವನ್ನು ತೊಟ್ಟು ನಿಮ್ಮ ಹಾಗೆ ಬಡವರಿಗೆ ಸಹಾಯ ಮಾಡುತ್ತೇವೆ ಎಂದು ಅಪ್ಪನ ಜೊತೆ ವೇಷ ಕಟ್ಟಿ ನಿಂತರು.

ಜಾತ್ರೆಯಲ್ಲಿ ಬೆಳಿಗ್ಗೆಯಿಂದ   ರಾತ್ರಿ  ರವರೆಗೂ ಊಟ ತಿOಡಿಯನ್ನು ಮಾಡದೆ   ಹಣವನ್ನು ಸಂಗ್ರಹ ಮಾಡಿದರು...ಇವರ ಈ ಸೇವೆಗೆ  ಸಾರ್ವಜನಿಕರು ಪ್ರಶಂಸೆ ವ್ಯಕ್ತವಾಗುತ್ತಿದೆ.

ಈ ಸಂದರ್ಭದಲ್ಲಿ  ವಿವೇಕಾನಂದ ಯುವಕ ಮಂಡಳಿ ಬವಳಾಡಿಯ ಅಧ್ಯಕ್ಷರು ಸರ್ವ ಸದಸ್ಯರೂ ಕೈ ಜೋಡಿಸಿ ದೇಣಿಗೆ ಸOಗ್ರಹ ಮಾಡಿದ್ದರು...



Post a Comment

0 Comments