Header Ads Widget

Whats-App-Image-2024-05-08-at-4-44-56-PM-4

ಎಪಿಎಂಸಿ ರಕ್ಷಣಾ ಸಮಿತಿ ವತಿಯಿಂದ ಇಂದಿನಿಂದ ಅಹೋರಾತ್ರಿ ಧರಣಿ : ಭ್ರಷ್ಟರ ಅಮಾನತಿಗೆ ಪಟ್ಟು ಹಿಡಿದ ರಕ್ಷಣಾ ಸಮಿತಿ..!!


ಉಡುಪಿ: ನವೆಂಬರ್ : 29: ಪ್ರೈಮ್ ಟಿವಿ ನ್ಯೂಸ್ : ಉಡುಪಿ ಎಪಿಎಂಸಿ ಅಧಿಕಾರಿಗಳ ಅವ್ಯವಹಾರ ಮತ್ತು ಭ್ರಷ್ಟಾಚಾರದ ವಿರುದ್ದ ಹಗಲು ರಾತ್ರಿ ಧರಣಿಯನ್ನು ಎಪಿಎಂಸಿ ಪ್ರಾಂಗಣದ ಎದುರು ಇಂದು ನವೆಂಬರ್ 29 ರಂದು ಕೈಗೊಳ್ಳಲಾಗುವುದು ಎಂದು ಎಪಿಎಂಸಿ ರಕ್ಷಣಾ ಸಮಿತಿ ನಿರ್ಧರಿಸಿದೆ.

ಲಂಚ ಪಡೆದ ಅಧಿಕಾರಿಗಳನ್ನು ಅಮಾನತು ಮಾಡುವುದು, ಕ್ಯಾನ್ಸರ್ ಪೀಡಿತ ವರ್ತಕನಿಂದ ಲೈಸನ್ಸ್ ಗಾಗಿ ಲಂಚ ಪಡೆದಿರುವವರನ್ನು ಅಮಾನತುಗೊಳಿಸುವುದು, ಅದಾಗಲೇ ಮೃತರಾಗಿರುವ ವ್ಯಕ್ತಿಯ ಹೆಸರಿನಲ್ಲೇ ಗೋಡೌನ್ ಬಾಡಿಗೆ ಪಡೆಯುವುದು, ಮೂಲಭೂತ ಸೌಕರ್ಯದ ಕೊರತೆ ಹಾಗೂ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿರುವ ಭ್ರಷ್ಟರ ಅಮಾನತು ಇತ್ಯಾದಿ ಇತರೆ ಬೇಡಿಕೆಗಳನ್ನು ಮುಂದಿಟ್ಟುಕೊಂದು ಪ್ರತಿಭಟನೆ ನಡೆಸುವುದಾಗಿಎಪಿಎಂಸಿ ರಕ್ಷಣಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.



Post a Comment

0 Comments