Header Ads Widget

ರೈಲ್ವೆ ಇಲಾಖೆ ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸದೇ ಇದ್ದಲ್ಲಿ ಅನಿರ್ದಿಷ್ಟಾವಧಿ ಹೋರಾಟ : ಸಂಚಾಲಕ ರಾಜೀವ್‌ ಪಡುಕೋಣೆ..!!


ಕುಂದಾಪುರ: ಸೇನಾಪುರ ನಿಲ್ದಾಣದಲ್ಲಿ ಎಕ್ಸ್‌ ಪ್ರೆಸ್‌ ರೈಲು ನಿಲುಗಡೆ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ಮೆರವಣಿಗೆ ನಾಡಾ   ಗ್ರಾಮ ಪಂಚಾಯತ್‌ ನಿಂದ ಆರಂಭಗೊಂಡು ಸೇನಾಪುರ ರೈಲ್ವೇ ನಿಲ್ದಾಣದವರೆಗೆ ಸಾಗಿಬಂದು, ಬಳಿಕ ರೈಲ್ವೇ ನಿಲ್ದಾಣದಲ್ಲಿ   ಬೃಹತ್‌ ಪ್ರತಿಭಟನೆ ನೆಡೆಯಿತು.

ಹೋರಾಟ ಸಮಿತಿಯ ಸಂಚಾಲಕ ರಾಜೀವ್‌ ಪಡುಕೋಣೆ ಮಾತನಾಡಿ ಸೇನಾಪುರ ರೈಲ್ವೇ ನಿಲ್ದಾಣದಲ್ಲಿ ಮೂರು ರೈಲ್ವೇ ಟ್ರ್ಯಾಕ್‌ ಗಳಿರುವುದಲ್ಲದೇ, ರೈಲು ನಿಲುಗಡೆಗೆ ಬೇಕಾದ ಪೂರಕವಾದ ಎಲ್ಲಾ ವ್ಯವಸ್ಥೆಗಳಿದ್ದರೂ ಇಲ್ಲಿ ಎಕ್ಸ್‌ ಪ್ರೆಸ್‌ ರೈಲು ನಿಲುಗಡೆಯಾಗುತ್ತಿಲ್ಲ. ಎಕ್ಸ್‌ ಪ್ರೆಸ್‌ ರೈಲು ನಿಲುಗಡೆಯಾದರೇ ಇಲ್ಲಿನ ಸುತ್ತಮುತ್ತ ಸುಮಾರು 24 ಗ್ರಾಮದ ಜನರಿಗೆ ಪ್ರಯೋಜನವಾಗಲಿದೆ.

ಕಾರವಾರ, ಗೋವಾ, ರತ್ನಗಿರಿ, ಮುಂಬೈ, ಹಾಸನ, ಮೈಸೂರು, ಬೆಂಗಳೂರು ಹಾಗೂ ಕೇರಳ ರಾಜ್ಯದ ನಗರಗಳಲ್ಲಿ   ವಾಸವಿರುವವರಿಗೆ ಪ್ರಯಾಣಕ್ಕೆ ಸುಲಭವಾಗುತ್ತದೆ. ಇಲ್ಲಿ ರೈಲು ನಿಲುಗಡೆ ಮಾಡುವುದರಿಂದ ರೈಲ್ವೇ ಇಲಾಖೆಗೂ ಲಾಭವಾಗಲಿದೆ ಎಂದು ಹೇಳಿದರು. 


ಮರವಂತೆ ವರಹ ಸ್ವಾಮಿ ದೇವಸ್ಥಾನದ ಅಧ್ಯಕ್ಷರಾದ ಸತೀಶ್ ಎಂ ನಾಯಕ್ ಅವರ ಮಾತನಾಡಿ ಸೇನಾಪುರದಲ್ಲಿ ಎಕ್ಸ್‌  ಪ್ರೆಸ್‌ ರೈಲು ನಿಲುಗಡೆಯಾದರೇ ಇಲ್ಲಿನ ಸ್ಥಳೀಯ ಪ್ರವಾಸೋದ್ಯಮ ಮತ್ತು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಾಗಲಿದೆ.ಸೇನಾಪುರದ ರೈಲ್ವೇ ನಿಲ್ದಾಣದ ಸುತ್ತಮುತ್ತಲಿನ ಪ್ರವಾಸೋದ್ಯಮಕ್ಕೂ ಇದು ಪರೋಕ್ಷವಾಗಿ ಅನುಕೂಲವಾಗಲಿದೆ.

ರೈಲು ನಿಲುಗಡೆಯಾಗುವ ತನಕ ಹೋರಾಟ ನಿರಂತರವಾಗಿ ಮಾಡುತ್ತೇವೆ. ಪ್ರಜಾಪ್ರಭುತ್ವದಲ್ಲಿ ಆಳುವ ಸರ್ಕಾರ ಪ್ರಜೆಗಳಿಗೆ   ಅನುಕೂಲವಾಗುವಂತೆ ನಡೆದುಕೊಳ್ಳಬೇಕು. ಸರ್ಕಾರ ಮತ್ತು ರೈಲ್ವೆ ಇಲಾಖೆ ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸದೇ         ಇದ್ದಲ್ಲಿ ಅನಿರ್ದಿಷ್ಟಾವಧಿ ಹೋರಾಟ ಮಾಡುತ್ತೇವೆ ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ. 


ಸೇನಾಪುರ ರೈಲ್ವೆ ಸ್ಟೇಷನ್ ಮಾಸ್ಟರ್  ಸುಕುಮಾ   ಕುಂದಾಪುರ ತಾಲೂಕು ಸೇನಾಪುರ ರೈಲ್ವೇ ಮನವಿಯನ್ನು ಸ್ವೀಕರಿಸಿ ಮೇಲಧಿಕಾರಿಗೆ  ಮನವಿ ಸಲ್ಲಿಸುವುದಕ್ಕೆ ಹೇಳಿದರು ಈ ಸಂದರ್ಭದಲ್ಲಿ  ತಾಲೂಕು ಪಂಚಾಯತ್‌ ನ ಮಾಜಿ ಸದಸ್ಯರಾದ ಕೆನಡಿ ಪಿರೆರಾ,  ಕಾರ್ಮಿಕ ಮುಖಂಡ ಸುರೇಶ್‌ ಕಲ್ಲಗಾರ್‌, ಕೆಂಚನೂರು ಸೋಮಶೇಖರ್‌ ಶೆಟ್ಟಿ, ಮಾಜಿ ಮಂಡಲ ಪ್ರಧಾನರು ಅರುಣ್‌ ಕುಮಾರ್‌  ಶೆಟ್ಟಿ, ಮರವಂತೆ ವರಾಹ ಸ್ವಾಮಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸತೀಶ್‌ ಎಂ ನಾಯಕ್‌  ಮರವಂತೆ, ಅರವಿಂದ ಪೂಜಾರಿ  ಸೇರಿ 24 ಗ್ರಾಮದ ಗ್ರಾಮಸ್ಥರು, ಹೋರಾಟ ಸಮಿತಿಯ ಸದಸಸ್ಯರು ಉಪಸ್ಥಿತರಿದ್ದರು. 

ಹೋರಾಟ ಸಮಿತಿಯ ಮುಖಂಡ ಫಿಲಿಪ್‌ ಡಿ'ಸಿಲ್ವಾ ಪ್ರಸ್ತಾವಿಸಿ ಸ್ವಾಗತಿಸಿದರು, ರಾಜೇಶ್‌ ಪಡುಕೋಣೆ ವಂದಿಸಿದರು, ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.


Post a Comment

0 Comments