Header Ads Widget

ಮುಂಬೈ : ಭಾರತ್ ಕೋ ಆಪರೇಟಿವ್ ಬ್ಯಾಂಕ್ ಪ್ರಧಾನ ಕಚೇರಿಗೆ ಶಾಸಕ ಯಶ್ ಪಾಲ್ ಸುವರ್ಣ ಭೇಟಿ..!!


ಮುಂಬೈ : ಪ್ರೈಮ್ ಟಿವಿ ನ್ಯೂಸ್ : ಭಾರತ್ ಕೋ ಆಪರೇಟಿವ್ ಬ್ಯಾಂಕ್ ಲಿ. ಇದರ ಮುಂಬೈ ಪ್ರಧಾನ   ಕಚೇರಿಗೆ ಉಡುಪಿ   ವಿಧಾನಸಭಾ ಕ್ಷೇತ್ರದ ಶಾಸಕ, ಸಹಕಾರಿ ಮುಖಂಡ ಶ್ರೀ ಯಶ್ ಪಾಲ್ ಸುವರ್ಣ ಭೇಟಿ ನೀಡಿದರು.

ಮುಂಬೈನಲ್ಲಿ ಬದುಕುಕಟ್ಟಿಕೊಂಡಿದ್ದ  ಬಿಲ್ಲವ ಸಮುದಾಯದ ಹಿರಿಯರ ದೂರದೃಷ್ಟಿಯ ಕಲ್ಪನೆ ಹಾಗೂ ಪ್ರಾಮಾಣಿಕ ಗ್ರಾಹಕ   ಸ್ನೇಹಿ ಸೇವೆಯ ಧ್ಯೇಯದೊಂದಿಗೆ 1978 ರಲ್ಲಿ ಪ್ರಾರಂಭಗೊಂಡ ಭಾರತ್ ಬ್ಯಾಂಕ್ ಕಳೆದ 45 ವರ್ಷಗಳಲ್ಲಿ ನಿರಂತರ ಪ್ರಗತಿ   ಸಾಧಿಸಿ ಪ್ರಸ್ತುತ 103 ಶಾಖೆಗಳನ್ನು ಹೊಂದಿ ವ್ಯವಹಾರ ನಡೆಸುವ ಮೂಲಕ ಸಮಸ್ತ ತುಳುನಾಡಿನ ಜನರ ಹೆಮ್ಮೆಯ ಬ್ಯಾಂಕ್   ಆಗಿ ಗುರುತಿಸಿಕೊಂಡಿದೆ ಎಂದರು.

ಮಹಾರಾಷ್ಟ್ರ, ಗುಜರಾತ್, ಕರ್ನಾಟಕದಲ್ಲಿ ನೆಲೆನಿಂತ ಕರಾವಳಿಗರಿಗೆ ತನ್ನ ಶಾಖೆಗಳ ಮೂಲಕ ವಿಶೇಷವಾಗಿ ಆರ್ಥಿಕ   ಸಹಕಾರ ನೀಡುವ ಕಾರ್ಯ ನಿರಂತರವಾಗಿ ಭಾರತ್ ಬ್ಯಾಂಕ್ ಮೂಲಕ ಸಾಗಿ ಬರಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ವಿದ್ಯಾನಂದ ಎಸ್. ಕರ್ಕೇರ, ಹಿರಿಯ ಅಧಿಕಾರಿಗಳಾದ ಶ್ರೀ ದಿನೇಶ್ ಬಿ. ಸಾಲ್ಯಾನ್, ಶ್ರೀ ವಿಶ್ವನಾಥ ಜಿ. ಸುವರ್ಣ, ಶ್ರೀ ಮಹೇಶ್ ಬಿ. ಕೋಟ್ಯಾನ್, ಶ್ರೀ ಜನಾರ್ಧನ ಎಂ. ಪೂಜಾರಿ ಹಾಗೂ ಕೇಂದ್ರ ಕಛೇರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Post a Comment

0 Comments