ಮಹಾರಾಷ್ಟ್ರ: ಮಹಾರಾಷ್ಟ್ರದ ನಾಗ್ಪುರ ರೈಲು ನಿಲ್ದಾಣದಲ್ಲಿ ರೈಲು ಚಲಿಸುತ್ತಿದ್ದ ವೇಳೆ ಪ್ಲಾಟ್ಫಾರ್ಮ್ನಿಂದ ಬಿದ್ದು ಮಹಿಳೆಯೊಬ್ಬಳು ಮೃತಪಟ್ಟ ಘಟನೆ ನಡೆದಿದೆ.
ಮೃತ ಮಹಿಳೆ ಗಾಯತ್ರಿ ಸ್ವಾಮಿವಿವೇಕಾನಂದ ಪಾಂಡೆ ಎಂದು ತಿಳಿದುಬಂದಿದೆ.
ತನ್ನ ಇಬ್ಬರು ಮಕ್ಕಳೊಂದಿಗೆ ದಾನಪುರ- ಬೆಂಗಳೂರು ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ನಾಗ್ಪುರ ನಿಲ್ದಾಣದಲ್ಲಿ ತಿಂಡಿಯನ್ನು ತೆಗೆದುಕೊಳ್ಳಲು ರೈಲು ನಿಂತಿದ್ದಾಗ ಇಳಿದಿದ್ದಾಳೆ. ಆದರೆ ಆಕೆ ತಿಂಡಿಯನ್ನು ತೆಗೆದುಕೊಳ್ಳುತ್ತಿದ್ದಾಗಲೇ ರೈಲು ಚಲಿಸಲು ಪ್ರಾರಂಭವಾಗಿದೆ.ಇದನ್ನು ಗಮನಿಸಿದ ಗಾಯತ್ರಿ ರೈಲನ್ನು ಹತ್ತಲು ಪ್ರಯತ್ನಿಸಿದ್ದಾಳೆ. ಆದರೆ ಆಕೆ ರೈಲು ಮತ್ತು ಪ್ಲಾಟ್ಫಾರ್ಮ್ ನಡುವಿನ ಅಂತರದಲ್ಲಿ ಜಾರಿ ಬಿದ್ದಿದ್ದಾಳೆ.
ಈ ವೇಳೆ ಆಕೆಯ ತಲೆಗೆ ಗಂಭೀರ ಪೆಟ್ಟು ಬಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.ಘಟನೆಯ ನಂತರ ರೈಲನ್ನು ನಿಲ್ಲಿಸಲಾಯಿತು. ಘಟನೆಗೆ ಸಂಬಂಧಿಸಿ ಆಕೆಯ 19ರ ಹಾಗೂ 23 ವರ್ಷದ ಹೆಣ್ಣು ಮಕ್ಕಳಿಗೆ ವಿಷಯ ತಿಳಿಸಲಾಗಿದೆ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ.
0 Comments