Header Ads Widget

ದೇಗುಲದ ಧರ್ಮದರ್ಶಿಯಿಂದ ದೇವರ ದರ್ಶನಕ್ಕೆಂದು ಬಂದಿದ್ದ ಮಹಿಳೆ ಮೇಲೆ ಹಲ್ಲೆ : ಆರೋಪಿಯ ಬಂಧನ..!!


ಬೆಂಗಳೂರು :
ಬೆಂಗಳೂರನ ಅಮೃತಹಳ್ಳಿ ಸಮೀಪ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಲ್ಲಿ ಧರ್ಮದರ್ಶಿಯೋರ್ವ ಮಹಿಳೆ ಮೇಲೆ ಹಲ್ಲೆ ನಡೆಸಿ, ಜಡೆ ಹಿಡಿದು ಹೊರಗೆ ಬಿಸಾಕಿರುವ ಹೀನ ಕೃತ್ಯದ ಸಂಪೂರ್ಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಹಿಳೆ ದೇವರ ದರ್ಶನಕ್ಕೆಂದು ಬಂದಿದ್ದರು, ಆ ವೇಳೆ ದೇಗುಲದಲ್ಲಿದ್ದ ಧರ್ಮದರ್ಶಿ ಮುನಿಕೃಷ್ಣ ನೀನು ಸ್ನಾನ ಮಾಡಿದಾಗೆ ಕಾಣುತ್ತಿಲ್ಲ ಕಪ್ಪಗಿದ್ದೀಯಾ, ನಿನ್ನನ್ನ ಒಳಗೆ ಬಿಡಲ್ಲ ಎಂದು ತಡೆದು ಹಲ್ಲೆ ನಡೆಸಿದ್ದಾರೆ.

ಅಲ್ಲದೆ ಮುನಿಕೃಷ್ಣ ರಾಡ್‌ನಿಂದಲೂ ಹಲ್ಲೆಗೆ ಮುಂದಾಗಿದ್ದು, ಈ ವೇಳೆ ಅರ್ಚಕ ರಕ್ಷಣೆಗೆ ಧಾವಿಸಿದ್ದಾರೆ. ಘಟನೆಯ ಕುರಿತು ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಮುನಿಕೃಷ್ಣ ಮೇಲೆ ಸೆಕ್ಷನ್ 354ರ ಅಡಿ ಕೇಸ್ ಹಾಕಿ ಬಂಧಿಸಲಾಗಿದೆ. 

Post a Comment

0 Comments