Header Ads Widget

ಪ್ರಮೋದ್ ಕುಮಾರ್ ಅವರು ಮುಂದೆ ಇನ್ನೊಮ್ಮೆ ಉನ್ನತ ಹುದ್ದೆಯೊಂದಿಗೆ ಉಡುಪಿ ಜಿಲ್ಲೆಗೆ ಆಗಮಿಸಲಿ : ಅನ್ಸಾರ್ ಅಹಮದ್..!!


ಉಡುಪಿ:
ಕಳೆದ ಎರಡು ವರ್ಷಗಳಿಂದ ಉಡುಪಿ ನಗರವನ್ನು ಶಾಂತವಾಗಿರಿಸಿ ನನ್ನಂತಹ ಅದೆಷ್ಟೋ  ಜನರಿಗೆ ಮಾದರಿಯಾಗಿರುವ ಉಡುಪಿ ನಗರ ಠಾಣಾ ವೃತ್ತ ನಿರೀಕ್ಷಕರಾದ ಪ್ರಮೋದ್ ಸರ್ ರವರು  ವರ್ಗಾವಣೆ ಗೊಂಡಿರುತ್ತಾರೆ.

 ಸಮಾಜದಲ್ಲಿ ಶಾಂತಿಯನ್ನು ಬಯಸುವ ನನ್ನಂತಹ ಬಹುತೇಕ ಜನರಿಗೆ ಅವರ ವರ್ಗಾವಣೆಯ ಸುದ್ದಿ ಬಹಳ ಬೇಸರ ತಂದಿದೆ.  

ಅಪರಾಧಿ ಅಪರಾಧವನ್ನು ಮಾಡುವ ಮೊದಲು ಸಾವಿರ ಸಲ ಯೋಚಿಸುವ ವಾತಾವರಣವನ್ನು ಸೃಷ್ಟಿಸಿದ ತಾಕತ್ತು ಪ್ರಮೋದ್ ಸಾರ್ ರವರದ್ದು.

ಆದರೆ ಪ್ರಮೋದ್ ಕುಮಾರ್ ಅವರು ಉಡುಪಿ ನಗರದಲ್ಲಿ ಅಕ್ರಮ ಚಟುವಟಿಕೆ ಮಾಡುವವರಿಗೆ, ರೌಡಿಗಳಿಗೆ ಸಿಂಹ ಸ್ವಪ್ನವಾಗಿದ್ದರು.ಲಂಚ ವಿರೋದಿಯಾಗಿದ್ದ ಇವರು ಎಲ್ಲರಿಗೂ ಮೆಚ್ಚುಗೆಯಾಗಿದ್ದರು.ಇವರ ಈ ವರ್ಗಾವಣೆ ಕೆಲವರಿಗೆ ಖುಷಿಯಾಗಿದ್ದಾರೆ, ಅನೇಕ ಉಡುಪಿಯ ಮಂದಿ ಬೇಸರ ವ್ಯಕ್ತಪಡಿಸಿದ್ದಾರೆ.

ಅವರ ಗದರಿಕೆಯಲ್ಲೂ ಪ್ರೀತಿ ವಾತ್ಸಲ್ಯವಿದ್ದು ಎಂತಹ ಯುವಕರನ್ನೂ ತಿದ್ದುವಂತಹ ಶಕ್ತಿ ಅವರಲ್ಲಿದೆ.ಮುಂದೆ ಇನ್ನೊಮ್ಮೆ ಉನ್ನತ ಹುದ್ದೆಯೊಂದಿಗೆ ಉಡುಪಿ ಜಿಲ್ಲೆಗೆ ಆಗಮಿಸಿ ಎಂದು ಹಾರೈಸುವ- ಅನ್ಸಾರ್ ಅಹಮದ್ ಉಡುಪಿ.

Post a Comment

0 Comments