ಕಾರವಾರ: ಪರೇಶ್ ಮೇಸ್ತ ಸಾವು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಹೊನ್ನಾವರ ನ್ಯಾಯಾಲಯಕ್ಕೆ ಇಂದು ಸಿಬಿಐ ತಂಡವು ಈ ಹಿನ್ನೆಲೆ ವರದಿ ಸಲ್ಲಿಸಿದ್ದು, "ಪರೇಶ್ ಮೇಸ್ತಾ ಅವರದ್ದು ಕೊಲೆಯಲ್ಲ. ಅದು ಆಕಸ್ಮಿಕ ಸಾವು" ಎಂದು ವರದಿ ಉಲ್ಲೇಖಿಸಿದೆ.
ಹೊನ್ನಾವರದಲ್ಲಿ 2017ರ ಡಿಸೆಂಬರ್ 6ರಂದು ಅನ್ಯ ಕೋಮುಗಳ ಮಧ್ಯೆ ಗಲಭೆ ನಡೆದಿತ್ತು. ಅದೇ ವೇಳೆ ಮೀನುಗಾರ ಪರೇಶ್ ಮೇಸ್ತಾ ಅವರು ನಾಪತ್ತೆಯಾಗಿದ್ದರು. ಅದಲ್ಲದೆ, ಡಿಸೆಂಬರ್ 8ರಂದು ಪರೇಶ್ ಮೇಸ್ತಾ ಅವರ ಶವವು ನಗರದಲ್ಲಿ ಇರುವ ಶನಿ ದೇವಸ್ಥಾನದ ಹಿಂಭಾಗದ ಶೆಟ್ಟಿಕೆರೆಯಲ್ಲಿ ಪತ್ತೆಯಾಗಿತ್ತು. ಈ ಸಂದರ್ಭ ಪರೇಶ್ ಮೇಸ್ತಾ ಅವರನ್ನು ಮುಸ್ಲಿಮರೇ ಕೊಲೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರು ಹಾಗೂ ಹಿಂದೂ ಸಂಘಟನೆಗಳು ಆರೋಪ ಮಾಡಿದ್ದವು ಹಾಗಾಗಿ ಈ ಪ್ರಕರಣವು ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಇನ್ನು ಬಿಜೆಪಿ ಮುಖಂಡರು ಹಾಗೂ ಹಿಂದೂ ಸಂಘಟನೆಗಳು ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ್ದರು. ಹಾಗೇ ಈ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿತ್ತು. ಆದರೆ ಇದೀಗ ನಾಲ್ಕೂವರೆ ವರ್ಷದ ತನಿಖೆಯ ಬಳಿಕ ಸಿಬಿಐ ನ್ಯಾಯಾಲಯಕ್ಕೆ ವಿಸ್ತøತ ವರದಿ ಸಲ್ಲಿಸಿದೆ.
0 Comments