ಬೈರಂಪಳ್ಳಿ : ಬೈರಂಪಳ್ಳಿ ವ್ಯಾಪ್ತಿಯ ವೃದ್ದೆ ಮಹಿಳೆ ಅಪ್ಪಿ ಕುಲಾಲ್ ಎಂಬುವವರು ಆರೋಗ್ಯ ಸಮಸ್ಯೆಯಿಂದ ತೋಟದಲ್ಲಿ ಜೀವನ್ಮರಣ ಪರಿಸ್ಥಿತಿಯಲ್ಲಿ ಬಿದ್ದಿರುದನ್ನು ಕಂಡು ಅಪ್ಪಿಯವರು ನಿರ್ಗತಿಕರಾಗಿರುವ ಕಾರಣ ಅಲ್ಲಿನ ಸ್ಥಳೀಯರು ಉಡುಪಿ ಜಿಲ್ಲೆಯ ಶ್ರಮಿಕ ತರುಣರ ತಂಡಕ್ಕೆ ತಿಳಿಸಿದಾಗ ಕೂಡಲೇ ಕಾರ್ಯಪ್ರವೃತ್ತರಾದ ಶ್ರಮಿಕರು, ತಂಡದ ಮಹಿಳಾ ಘಟಕದ ಗೌರವಾಧ್ಯಕ್ಷೆ ಶೀಮತಿ ವಿಜಯಶ್ರೀ ಭಟ್ ರವರ ನೇತ್ರತ್ವದಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿದ್ದಾರೆ.
ಉಡುಪಿ ಜಿಲ್ಲಾ ಆರೋಗ್ಯ ಸಿಬಂದಿಗಳ ನೆರವಿನೊಂದಿಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು.ಈಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಸೇವೆಯಲ್ಲಿ ತಂಡದ ಸಂಸ್ಥಾಪಕರು ಸಂತೋಷ್ ಕುಮಾರ್ ಬೈರಂಪಳ್ಳಿ, ಸದಸ್ಯರಾದ ಸೂರಜ್ ಆಚಾರ್ಯ, ಮಹಿಳಾ ಘಟಕದ ಪ್ರದಾನ ಕಾರ್ಯದರ್ಶಿ ಶ್ರೀಮತಿ ದೀಪಾ ಕುಮಾರಿ ಮತ್ತು ಸದಸ್ಯೆ ಕುಮಾರಿ ಶಿಲ್ಪಾ ಉಪಸ್ಥಿತರಿದ್ದರು.
0 Comments